ಶ್ರೀಕೃಷ್ಣ ಪ್ರಾಪರ್ಟಿಸ್ & ಪ್ರಮೋಟರ್ಸ್ ಲಾಂಛನದಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಪಂಡಿತ ಚಿತ್ರದ ಚಿತ್ರಕ್ಕಾಗಿ ಲಗ್ಗೆರೆಯಲ್ಲಿ ಆರ್ಕೆಸ್ಟ್ರಾ(ವಾದ್ಯಗೊಷ್ಠಿ) ಸಾಂಗ್ ಚಿತ್ರಿಸಿಕೊಳ್ಳವ ಮೂಲಕ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ನಿರ್ದೇಶಕ ಕೃಷ್ಣೇಂದ್ರ ಪಂಡಿತ್. ಕೃಷ್ಣೇಂದ್ರ ಪಂಡಿತ್ ಹಾಗೂ ಮೇಘಶ್ರೀ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಕೃಷ್ಣೇಂದ್ರ ಪಂಡಿತ್ ಸಂಗೀತವನ್ನು ನೀಡಿ, ನೃತ್ಯ ನಿರ್ದೆಶನವನ್ನು ಮಾಡಿದ್ದಾರೆ. ಚಿತ್ರದ ನಿರ್ಮಾಪಕರೂ ಆಗಿರುವ ಕೃಷ್ಣೇಂದ್ರ ಪಂಡಿತ್ ಈ ಚಿತ್ರದ ಗಾಯಕರು ಹೌದು. ಸುರೇಶ್ಬಾಬು, ಮನೋಹರ್ ಛಾಯಾಗ್ರಹಣ ಹಾಗೂ ಜೋ.ನಿ.ಹರ್ಷ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣೇಂದ್ರ ಪಂಡಿತ್, ಮೆಘಶ್ರೀ, ದೀಪ, ಮಲ್ಲೆಶ್ ಎಡೆಹಳ್ಳಿ ಮುಂತಾದವರಿದ್ದಾರೆ.